“ಏಕೆ ಹೀಗಾಯ್ತೋ ನಾನು ಕಾಣೆನೋ” ಎಂಬ ಹಾಡು, ಚಲನಚಿತ್ರ “ಅಂಜದ ಗಂಡು” ಯಲ್ಲಿ ಕೇಳಬಹುದು. ಈ ಹಾಡನ್ನು ಎಸ್ ಪಿ ಬಿ ಮತ್ತು ಛಾಯ ಅವರು ಹಾಡಿದ್ದಾರೆ. ಚಲನಚಿತ್ರದ ನಟರು ರವಿಚಂದ್ರನ್ ಮತ್ತು ಖುಷ್ಬೂ ಅವರು. ಈ ಹಾಡು ಆತ್ಮೀಯ ಭಾವನೆಗಳನ್ನು ಹೊತ್ತಿದ್ದು, ಪ್ರೇಮದ ಭಾವನೆಗಳನ್ನು ಸುತ್ತುವರಿಯುತ್ತದೆ.
ಹಾಡು | ಏಕೆ ಹೀಗಾಯ್ತೋ ನಾನು ಕಾಣೆನೋ |
ಚಲನಚಿತ್ರ | ಅಂಜದ ಗಂಡು |
ಹಾಡಿದವರು | ಎಸ್ ಪಿ ಬಿ, ಛಾಯ |
ನಟರು | ರವಿಚಂದ್ರನ್, ಖುಷ್ಬೂ |
ಏಕೆ ಹೀಗಾಯ್ತೋ ನಾನು ಕಾಣೆನೋ
ಪ್ರೀತಿ ಮನದಲ್ಲಿ ಹೇಗೆ ಮೂಡಿತೋ
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ
ಏಕೆ ಹೀಗಾಯ್ತೋ ನಾನು ಕಾಣೆನೋ
ಪ್ರೀತಿ ಮನದಲ್ಲಿ ಹೇಗೆ ಮೂಡಿತೋ
ಆ ನೋಟದಲಿ ಅದು ಏನಿದೆಯೋ
ತುಟಿ ಅಂಚಿನಲಿ ಸವಿ ಜೇನಿದೆಯೋ
ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ
ಜೇನು ಹೀರಿದ ದುಂಬಿಯ ಹಾಗಿದೆ ನನ್ನ ಈ ಮನ
ನೀ ನಗುವಾಗ ಜರತಾರಿ ಹೊಸ ಸೀರೆಯುಟ್ಟು ಬಳುಕಾಡಿ ಬಂದೆ
ನೀ ನುಡಿದಾಗ ಮೊಳದುದ್ದ ಜಡೆ ತುಂಬ ಮಲ್ಲೆ ಮುಡಿದೆನ್ನ ಸೆಳೆದೆ
ಉಸಿರಾಟ ಮರೆತು ಹೋಯಿತು ಬೇರೇನು ಕಾಣದಾಯಿತು
ನಿನ್ನಲ್ಲಿ ನನ್ನ ಈ ಜೀವ ಸೇರಿತು
ಏಕೆ ಹೀಗಾಯ್ತೋ……
ಈ ಹೊಸದಾದ ಆನಂದ ತಂದಂತ ಮತ್ತಿನ ಮುತ್ತನ್ನ ತಂದೆ
ಆ ನೆನಪಲ್ಲೇ ಹೊಸದಾದ ಅನುರಾಗ ನನ್ನ ಎದೆಯಲ್ಲಿ ತಂದೆ
ಈ ನಾಡಿ ನಿಂತು ಹೋಯಿತು ನಾ ಯಾರೋ ಮರೆತು ಹೋಯಿತು
ನಿನ್ನಲ್ಲಿ ನನ್ನ ಈ ಜೀವ ಸೇರಿತು
ಏಕೆ ಹೀಗಾಯ್ತೋ….